ಕಾಡಿನಲ್ಲಿ….

ಇಲ್ಲಿ ಬಯಸಿದಂತೆ
ಬದುಕಬಹುದು
ಇಚ್ಛೆಯಂತೆ ಸಾಯಬಹುದು

ಸುತ್ತಲೂ ಮರಗಳು
ಮರದೊಳಗೆ ಕಿಕ್ಕಿರಿದು
ಪರಿಮಳಿಸಿವೆ ಹೂವುಗಳು

ಜಿಂಕೆ ಆನೆ ಹುಲಿಗಳು
ನೋಡಿಯೂ ನೋಡದಂತೆ
ತಮ್ಮ ಪಾಡಿಗೆ ತಾವು
ಹೆಜ್ಜೆಗಳನೂರಿ ಸಾಗಿಹವು

ಹಕ್ಕಿಗಳು ಆಗಾಗ್ಗೆ ಹಾಡಿ
ಗಮನ ಸೆಳೆಯುವವು
ನವಿಲು ನನಗೆಂದೇ
ಗರಿಯೊಂದನು ಉದುರಿಸಿಹುದು

ತಂಗಾಳಿ ಸುಳಿಸುಳಿದು
ಚಿಂತೆಗಳನೆತ್ತಿ ಕೊಂಡೊಯ್ಯುವುದು
ಮಲಗು ಮಲಗೆಂದು
ಮೆಲ್ಲನೆ ಪಿಸು ನುಡಿಯಾಡುವುದು

ಹೊಯ್!
ಕಷ್ಟಗಳೇ ಕಾಡು ಸುತ್ತಲು ಹೋಗಿ
ಕ್ಲೇಶಗಳೇ ಎಲೆಗಳನೆಣಿಸಲು ಶುರು ಮಾಡಿ….

ಅಲ್ಲ…. ಎಲ್ಲಾದರೂ
ಕಾಡು ಸುತ್ತಿ ಮರಳುವುದುಂಟೆ?
ಹೋಗಲಿ….
ಎಲೆಗಳನೆಣಿಸಿ ಮುಗಿಸಿದವರುಂಟೆ?

ಈಗ ಇಲ್ಲಿ
ಬಯಸಿದಂತೆ ಸಾಯಬಹುದು
ಇಚ್ಛೆಯಂತೆ ಬದುಕಬಹುದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಜಯ ವಿಲಾಸ – ಚತುರ್ಥ ತರಂಗ
Next post ಭರವಸೆ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys